ರಘುಬಾರ್ ದಾಸ್ (ಜನನ ೩ ಮೇ ೧೯೫೫) ಜಾರ್ಖಂಡ್‌ನ ಆರನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಭಾರತೀಯ ರಾಜಕಾರಣಿ. ಅವರು ೨೮ ಡಿಸೆಂಬರ್ ೨೦೧೪ ರಂದು ಜಾರ್ಖಂಡ್‌ನ ೬ ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದವರು ಮತ್ತು ಎರಡು ಬಾರಿ ಜಾರ್ಖಂಡ್ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ. ಇವರು ಟಾಟಾ ಸ್ಟೀಲ್‌ನ ಉದ್ಯೋಗಿಯಾಗಿದ್ದರು. ಅವರು ಐದು ಬಾರಿ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರು ೧೯೯೫ ರಿಂದ ೨೦೧೯ ರವರೆಗೆ ಜೆಮ್‌ಶೆಡ್‌ಪುರ ಪೂರ್ವವನ್ನು ಪ್ರತಿನಿಧಿಸುತ್ತಿದ್ದರು. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಆಂತರಿಕ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅವರನ್ನು ಜೈಲಿಗೆ ಕಳುಹಿಸಲಾಯಿತು. ಪೂರ್ಣಾವಧಿ ಪೂರೈಸಿದ ರಾಜ್ಯದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. == ಆರಂಭಿಕ ಜೀವನ == ಅವರು ೩ ಮೇ ೧೯೫೫ ರಂದು ಟಿ.ಎಮ್.ಎಚ್ ಹಾಸ್ಪಿಟಲ್ ಜಮ್ಶೆಡ್‌ಪುರದಲ್ಲಿ ಉಕ್ಕಿನ ಕಂಪನಿಯಲ್ಲಿ ಕಾರ್ಮಿಕರಾಗಿದ್ದ ಚವನ್ ರಾಮ್‌ಗೆ ಜನಿಸಿದರು. ಅವರು ತೈಲಿ ಜಾತಿಗೆ ಸೇರಿದವರು. ಅವರು ಭಾಲುಬಸ ಹರಿಜನ ಪ್ರೌಢಶಾಲೆಯಿಂದ ಮೆಟ್ರಿಕ್ಯುಲೇಷನ್ ಉತ್ತೀರ್ಣರಾದರು ಮತ್ತು ಬಿ.ಎಸ್ಸಿ. ಜಮ್ಶೆಡ್‌ಪುರ ಸಹಕಾರಿ ಕಾಲೇಜಿನಲ್ಲಿ ಮಾಡಿದರು. ಅದೇ ಕಾಲೇಜಿನಲ್ಲಿ ಕಾನೂನು ಓದಿ ಎಲ್ ಎಲ್ ಬಿ ಪದವಿಯನ್ನೂ ಪಡೆದರು. ಅಧ್ಯಯನದ ನಂತರ, ಅವರು ಕಾನೂನು ವೃತ್ತಿಪರರಾಗಿ ಟಾಟಾ ಸ್ಟೀಲ್‌ಗೆ ಸೇರಿದರು. ಅವರು ಮಾಜಿ ಆರ್‌ಎಸ್‌ಎಸ್‌ ಪದಾಧಿಕಾರಿ. == ರಾಜಕೀಯ ವೃತ್ತಿಜೀವನ == ದಾಸ್ ಕಾಲೇಜು ದಿನಗಳಿಂದಲೂ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಅವರು ಜಯಪ್ರಕಾಶ್ ನಾರಾಯಣ್ ನೇತೃತ್ವದ ರಾಜ್ಯದಲ್ಲಿ ಸಂಪೂರ್ಣ ಕ್ರಾಂತಿಯ ಚಳವಳಿಯಲ್ಲಿ ಭಾಗವಹಿಸಿದರು. ಅವರನ್ನು ಬಂಧಿಸಿ ಗಯಾದಲ್ಲಿ ಸೆರೆಮನೆಗೆ ಹಾಕಲಾಯಿತು ಮತ್ತು ಇಂದಿರಾಗಾಂಧಿಯವರು ಹೇರಿದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮತ್ತೆ ಜೈಲುಪಾಲಾಗಿದ್ದರು . ತರುವಾಯ, ದಾಸ್ ೧೯೭೭ ರಲ್ಲಿ ಜನತಾ ಪಕ್ಷಕ್ಕೆ ಸೇರಿದರು. ನಂತರ ಅವರು ೧೯೮೦ ರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಥಾಪಕ ಸದಸ್ಯರಾಗಿ ಸೇರಿದರು. ೧೯೮೦ರಲ್ಲಿ ಮುಂಬೈನಲ್ಲಿ ನಡೆದ ಬಿಜೆಪಿಯ ಮೊದಲ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು. ಅವರನ್ನು ಜಮ್ಶೆಡ್‌ಪುರದ ಸೀತಾರಾಮದೇರಾದ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ನಂತರ ಅವರು ನಗರ ಮುಖ್ಯ ಕಾರ್ಯದರ್ಶಿ ಮತ್ತು ಜಮ್ಶೆಡ್‌ಪುರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಬಿಜೆಪಿ ಕಾರ್ಯದರ್ಶಿ ಮತ್ತು ನಂತರ ಉಪಾಧ್ಯಕ್ಷರಾದರು. ಅವರು ೧೯೫೫ ರಲ್ಲಿ ಜಮ್ಶೆಡ್‌ಪುರ ಪೂರ್ವದಿಂದ ಬಿಹಾರ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. ಅವರು ಮತ್ತೆ ಐದು ಬಾರಿ ಅದೇ ಕ್ಷೇತ್ರದಿಂದ ಗೆದ್ದಿದ್ದಾರೆ. ಅವರು ೨೦೦೪ ರಲ್ಲಿ ಜಾರ್ಖಂಡ್‌ನಲ್ಲಿ ಬಿಜೆಪಿಯ ಮುಖ್ಯಸ್ಥರಾಗಿ ನೇಮಕಗೊಂಡರು. ೨೦೦೫ರ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ೩೦ ಸ್ಥಾನಗಳನ್ನು ಗೆದ್ದಿತ್ತು. ೨೦೦೫ರಲ್ಲಿ ಅರ್ಜುನ್‌ ಮುಂಡಾ ಮುಖ್ಯಮಂತ್ರಿಯಾಗಿದ್ದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ರಾಜ್ಯದಲ್ಲಿ ೨೦೦೯ ರ ಭಾರತೀಯ ಸಾರ್ವತ್ರಿಕ ಚುನಾವಣೆಯನ್ನು ಮುನ್ನಡೆಸಿದರು. ಅವರು ಶಿಬು ಸೊರೆನ್ ಮುಖ್ಯಮಂತ್ರಿಯಾಗಿದ್ದಾಗ ೩೦ ಡಿಸೆಂಬರ್ ೨೦೦೯ರಿಂದ ೨೯ ಮೇ ೨೦೧೦ ರವರೆಗೆ ಜಾರ್ಖಂಡ್ ರಾಜ್ಯದ ಉಪಮುಖ್ಯಮಂತ್ರಿ ಹುದ್ದೆಯನ್ನು ಹೊಂದಿದ್ದರು. ಅವರು ೧೬ ಆಗಸ್ಟ್ ೨೦೧೪ ರಂದು ಬಿಜೆಪಿಯ ರಾಷ್ಟ್ರೀಯ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ನೇಮಕಗೊಂಡರು. ಇವರು ಸುಮಾರು ೨೧ ಲಕ್ಷ ರೂ.ಗಳ ಆಸ್ತಿ ತೋರಿಸಿದ್ದಾರೆ. ೨೦೧೪ ರ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತವನ್ನು ಪಡೆದುಕೊಂಡಾಗ, ಅವರು ೨೮ ಡಿಸೆಂಬರ್ ೨೦೧೪ ರಂದು ರಾಜ್ಯದ ಆರನೇ ಮತ್ತು ಮೊದಲ ಬುಡಕಟ್ಟು ಅಲ್ಲದ ಮುಖ್ಯಮಂತ್ರಿಯಾದರು. ೨೦೧೯ ರ ಡಿಸೆಂಬರ್‌ನಲ್ಲಿ ನಡೆದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ, ಅವರ ನಾಯಕತ್ವದಲ್ಲಿ ಬಿಜೆಪಿ ಜೆಎಂಎಂ ಮೈತ್ರಿಕೂಟದ ವಿರುದ್ಧ ೮೧ ವಿಧಾನಸಭಾ ಸ್ಥಾನಗಳಲ್ಲಿ ೨೫ ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಯಿತು ಮತ್ತು ರಾಜೀನಾಮೆ ನೀಡಬೇಕಾಯಿತು. ಅವರು ೧೫,೦೦೦ ಕ್ಕೂ ಹೆಚ್ಚು ಮತಗಳೊಂದಿಗೆ ಜಮ್ಶೆಡ್‌ಪುರ ಪೂರ್ವ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿದ್ದ ಬಿಜೆಪಿಯ ಮಾಜಿ ನಾಯಕ ಸರಯು ರೈ ವಿರುದ್ಧ ಸೋತರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ರಘುಬರ್ ದಾಸ್ ಅಫಿಡವಿಟ್